ಅನುಪಮಾ ನಿರಂಜನ
ಆನುಪಮಾ ಅವರ ಮೊದಲಿನ ಹೆಸರು ವೆಂಕಟಲಕ್ಷ್ಮಿ. ವೃತ್ತಿಯಲ್ಲಿ ವೈದ್ಯರಾಗಿದ್ದರು. ಕುಟುಂಬದವರ ವಿರೋಧವನ್ನು ಎದುರಿಸಿ, ಕನ್ನಡದ ಮತ್ತೊಬ್ಬ ಪ್ರಮುಖ ಸಾಹಿತಿ ನಿರಂಜನ ಅವರನ್ನು ಅಂತರ್ಜಾತೀಯ ವಿವಾಹವಾಗಿ ಸಮಾಜಕ್ಕೆ ಆದರ್ಶವಾಗಿದ್ದರು. ಇವರಿಗೆ, ಇಬ್ಬರು ಮಕ್ಕಳು - ತೇಜಸ್ವಿನಿ ನಿರಂಜನ ಮತ್ತು ಸೀಮಂತಿನಿ ನಿರಂಜನ. ಅನುಪಮಾ ನಿರಂಜನ ಅವರು ಕ್ಯಾನ್ಸರ್ ಕಾಯಿಲೆಯಿಂದ ನರಳುತ್ತಿದ್ದರೂ, ತಮ್ಮ ಜೀವಿತದ ಕೊನೆಯವರೆಗೆ ಸಾಹಿತ್ಯ ಸೇವೆಯನ್ನು ನಿಲ್ಲಿಸಿರಲಿಲ್ಲ.
ಅನುಪಮಾ ನಿರಂಜನ ಕೃತಿಗಳು
ಅನೇಕ ,ಕತೆ,ಕಾದಂಬರಿಗಳು, ನಾಟಕ,ಆರೋಗ್ಯಕ್ಕೆ ಸಂಬಂಧಿಸಿದ ಲೇಖನಗಳನ್ನು ರಚಿಸಿದ್ದಾರೆ. ಅನುಪಮಾ ಅವರ ಋಣ ಕಾದಂಬರಿಯು ಋಣಮುಕ್ತಳು ಎಂಬ ಹೆಸರಿನಲ್ಲಿ ಚಲನಚಿತ್ರವಾಗಿದೆ. ಇದನ್ನು ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದರು.
ಕಾದಂಬರಿಗಳು
- ಅನಂತ ಗೀತ
- ಆಳ
- ದಿಟ್ಟೆ
- ಸಂಕೋಲೆಯೊಳಗಿಂದ
- ಶ್ವೇತಾಂಬರಿ
- ನೂಲು ನೇಯ್ದ ಚಿತ್ರ
- ಘೋಷ
- ಹಿಮದ ಹೂ
- ಸ್ನೇಹ ಪಲ್ಲವಿ
- ಹೃದಯವಲ್ಲಭ
- ಆಕಾಶಗಂಗೆ
- ಸಸ್ಯ ಶ್ಯಾಮಲಾ
- ಋಣ
- ಮೂಡಣ ಪಡುವಣ
- ಚಿತ್ತ ಮೋಹನ
- ಕಣಿವೆಗೆ ಬಂತು ಬೇಸಿಗೆ
- ಪರೀಕ್ಷೆ
- ನಟಿ
- ಮಾಧವಿ
- ಕೊಳಚೆ ಕೊಂಪೆಯ ದನಿಗಳು
- ಎಳೆ
- ಸೇವೆ
- ಮುಕ್ತಿಚಿತ್ರ
- ಮೂಲಮುಖಿ
ಕಥಾ ಸಂಕಲನ
- ಕಣ್ಮಣಿ
- ರೂವಾರಿಯ ಲಕ್ಸ್ಮಿ
- ನೀರಿಗೆ ನೈದಿಲೆ ಶೃಂಗಾರ
- ಏಳುಸುತ್ತಿನ ಮಲ್ಲಿಗೆ
- ಹೃದಯ ಸಮುದ್ರ
- ಗಿರಿಧಾಮ
- ಒಡಲು
- ಪುಷ್ಪಕ
- ಒಂದು ಗಿಣಿಯ ಕಥೆ
ವೈದ್ಯಕೀಯ
- ದಾಂಪತ್ಯ ದೀಪಿಕೆ
- ವಧುವಿಗೆ ಕಿವಿಮಾತು
- ಕೇಳು ಕಿಶೋರಿ
- ತಾಯಿ-ಮಗು
- ಸ್ತ್ರೀಸ್ವಾಸ್ಠ್ಯ ಸಂಹಿತೆ
- ಕೆಂಪಮ್ಮನ ಮಗು
- ಆರೋಗ್ಯಭಾಗ್ಯಕ್ಕೆ ವ್ಯಾಯಾಮ
- ಶುಭಕಾಮನೆ
- ಆಹಾರದಿಂದ ಆರೋಗ್ಯ
- ಕ್ಯಾನ್ಸರ್ ಜಗತ್ತು
- ಆರೋಗ್ಯ ದರ್ಶನ
- ಶಿಶುವೈದ್ಯ ದೀಪಿಕೆ
- ಒತ್ತಡದ ಬೇನೆಗಳು
ಪ್ರವಾಸ ಕಥನ
- ಸ್ನೇಹ ಯಾತ್ರೆ
- ಅಂಗೈಯಲ್ಲಿ ಯುರೊ ಅಮೆರಿಕ
ಆತ್ಮ ಕತೆ
- ನೆನಪು : ಸಿಹಿ-ಕಹಿ
- ಬರಹಗಾರ್ತಿಯ ಬದುಕು
ನಾಟಕ
ಕಲ್ಲೋಲ
ಶಿಶು ಸಾಹಿತ್ಯ
ದಿನಕ್ಕೊಂದು ಕಥೆ
stock | retire | vm
Why are we here?
All text is available under the terms of the GNU Free Documentation License
This page is cache of Wikipedia. History